ಕ್ಯಾಪ್ಟನ್ ಸಂಜಯ್ ಚೌಹಾಣ್ ಅವರು ಶೌರ್ಯ ಚಕ್ರ ಪುರಸ್ಕೃತರು. ಇವರು ೧೬ ನೇ ರಜಪೂತಾನಾ ರೈಫಲ್ಸ್‌ನ ಭಾರತೀಯ ಸೇನಾ ಅಧಿಕಾರಿ. ೧೯೯೪ ರಲ್ಲಿ ಉತ್ತರ ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾಗ ಹುತಾತ್ಮರಾದರು. ಅವರು ರಜಪೂತ ಕುಟುಂಬದಲ್ಲಿ ಜನಿಸಿದವರು. ೧೯೯೪ರ ಅಕ್ಟೋಬರ್ ೨೮ರಂದು ಜಮ್ಮು ಮತ್ತು ಕಾಶ್ಮೀರ ಲಚ್ಚಿಂಪೋರಾ ಗ್ರಾಮದಲ್ಲಿ ಕ್ಯಾಪ್ಟನ್ ಚೌಹಾಣ್ ಮತ್ತು ಅವರ ಮೂವರು ಸಹಸೈನಿಕರನ್ನು ಕೊಲ್ಲಲಾಯಿತು. ಆ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ವಿದೇಶಿ ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಿಂದ ಭಾರತವನ್ನು ಪ್ರವೇಶಿಸಿದ್ದರಿಂದ ಕಾಶ್ಮೀರದ ಬಂಡಾಯವು ಉತ್ತುಂಗದಲ್ಲಿತ್ತು. == ಆಪರೇಷನ್ ಸಾಹಸ್ == ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿಲಿಟರಿ ಪ್ರತಿ-ಬಂಡಾಯ ಕಾರ್ಯಾಚರಣೆಯ ಸಮಯದಲ್ಲಿ, ಕ್ಯಾಪ್ಟನ್ ಚೌಹಾಣ್ ಶತ್ರು ಭಯೋತ್ಪಾದಕ ಗುಂಪಿಗೆ ನುಸುಳಲು ಪ್ರಯತ್ನಿಸಿದರು. ಕಾಶ್ಮೀರದಲ್ಲಿ ತನ್ನ ಮಾಹಿತಿದಾರರ ಜಾಲದಿಂದ ಸಂಗ್ರಹಿಸಿದ ಕಾರ್ಯಸಾಧ್ಯವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಅವರು ಜಮ್ಮು ಮತ್ತು ಕಾಶ್ಮೀರದ ಲಚ್ಚಿಂಪೋರಾದಲ್ಲಿ ಅಡಗಿದ್ದ ವಿದೇಶಿ ಭಯೋತ್ಪಾದಕರ ಮೇಲೆ ದಾಳಿ ನಡೆಸಲು ಯೋಜಿಸಿದ್ದರು. ಈ ಕಾರ್ಯಾಚರಣೆ ಯಶಸ್ವಿಯಾದರೆ, ಕಾಶ್ಮೀರದ ಸೂಕ್ಷ್ಮ ಪ್ರದೇಶದಲ್ಲಿ ವಿದೇಶಿ ಉಗ್ರಗಾಮಿಗಳ ಶ್ರೇಣಿಯನ್ನು ನಿರ್ಮೂಲನೆ ಮಾಡಲು ಕಾರಣವಾಗಬಹುದು ಎಂದು ಯೋಚಿಸಿದ್ದರು. ವಿದೇಶಿ ಭಯೋತ್ಪಾದಕರ ವೇಷ ಧರಿಸಿದ ಕ್ಯಾಪ್ಟನ್ ಚೌಹಾಣ್ ಮತ್ತು ಅವನ ಜೊತೆಗಿನ ಮೂವರು ಸೈನಿಕರ ತಂಡವು ಎಕೆ-೪೭ ಶಸ್ತ್ರಾಸ್ತ್ರಗಳೊಂದಿಗೆ ಲಚ್ಚಿಂಪೋರಾ ಗ್ರಾಮವನ್ನು ಪ್ರವೇಶಿಸಿತು. ಜೆಸಿಒ ನೇತೃತ್ವದಲ್ಲಿ ಒಂದು ತುಕಡಿಯು ಹತ್ತಿರದ ಪರ್ವತಶ್ರೇಣಿಯಲ್ಲಿ ಅಡಗಿಕೊಂಡು, ಪರಿಸ್ಥಿತಿಯನ್ನು ಅವರ ಅನುಕೂಲ ಸ್ಥಳದಿಂದ ಗಮನಿಸಬೇಕು ಮತ್ತು ಸಹಾಯಕ್ಕಾಗಿ ಯಾವುದೇ ಕರೆಗೆ ಸ್ಪಂದಿಸಬೇಕು ಎಂದು ತೀರ್ಮಾನಿಸಲಾಯಿತು. ಸೈನಿಕರ ವೇಷಧಾರಿಗಳಾಗಿದ್ದ ಉಗ್ರಗಾಮಿಗಳಿಗೆ ಅನುಮಾನ ಮೂಡಿತು. ಶೀಘ್ರದಲ್ಲೇ, ತಂಡವು ಪತ್ತೆಯಾಯಿತು. ಅವರು ಭಯೋತ್ಪಾದಕರ ಗುಂಪಿನಿಂದ ತಪ್ಪಿಸಿಕೊಂಡು ಒಂದು ಗುಡಿಸಲಿನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡರು. ಆಗ ಭಯೋತ್ಪಾದಕರು ಬೆಟ್ಟಗಳಿಂದ ಇಳಿದರೂ ಸಹ ಬೆಂಬಲಕ್ಕಾಗಿ ಕರೆ ನೀಡಿದ ಸೈನಿಕರಿಗೆ ಪ್ರತಿಕ್ರಿಯಿಸುವಲ್ಲಿ ಜೆಸಿಒ ವಿಫಲರಾದರು. ಸೈನಿಕರ ಗುಂಪನ್ನು ಜೀವಂತವಾಗಿ ಸೆರೆಹಿಡಿದು ನಂತರ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಹಂದ್ವಾರ ಗ್ರಾಮದ ಮಧ್ಯದಲ್ಲಿ ಸೈನಿಕರ ಛಿದ್ರಗೊಂಡ ದೇಹಗಳು, ಪತ್ತೆಯಾದವು. ಉಗ್ರಗಾಮಿಗಳು ಅತ್ಯಂತ ಭೀಕರವಾಗಿ ಸೈನಿಕರ ಬೆರಳಿನ ಉಗುರುಗಳನ್ನು ಹೊರತೆಗೆದು, ಅವರ ಕಣ್ಣುಗಳನ್ನು ಹೊರತೆಗೆದು, ಅವರ ಕೈಗಳನ್ನು ಕತ್ತರಿಸಿ ಮತ್ತು ಅವರ ಖಾಸಗಿ ಭಾಗಗಳನ್ನು ಅಂಗವಿಕಲಗೊಳಿಸುವ ಮೂಲಕ ಚಿತ್ರಹಿಂಸೆ ನೀಡಿದ್ದಾರೆ ಎಂದು ಬಹಿರಂಗಪಡಿಸಿತು. ಶತ್ರುವಿನ ಎದುರಿನಲ್ಲಿ ಶೌರ್ಯ ತೋರಿದ್ದಕ್ಕಾಗಿ ಕ್ಯಾಪ್ಟನ್ ಸಂಜಯ್ ಚೌಹಾಣ್ ಅವರಿಗೆ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವಶೌರ್ಯ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. == ಉಲ್ಲೇಖಗಳು == == ಇತರೆ ಓದು == ೧. ಕರ್ನಲ್ ದನ್ವಿರ್ ಸಿಂಗ್ (೧೮ನೇ ಆಗಸ್ಟ್ ೨೦೧೪), ಕಾಶ್ಮಿರ್ಸ್ ಡೆತ್ ಟ್ರಾಪ್; ಟೇಲ್ಸ್ ಆಫ್ ಪರ್ಡಿಫ಼ೈ ಅಂಡ್ ವಾಲೋರ್. ಲಾನ್ಸರ್ ಪಬ್ಲಿ‌‍ಷರ್ಸ್ ಎಲ್ ಎಲ್ ಸಿ. ಪಿಪಿ.೩೮-೩೯, ಐಎಸ್ ಬಿಎನ್ ೯೭೮-೧-೯೪೦೯೮೮-೧೩-೯ == ಬಾಹ್ಯ ಸಂಪರ್ಕಗಳು == ಕಾಶ್ಮೀರಿ ಪಂಡಿತರು : ಒಂದು ಜನಾಂಗೀಯ ಶುದ್ಧೀಕರಣ ಜಗತ್ತನ್ನು ಮರೆತುಬಿಟ್ಟಿದೆ ಸಶಸ್ತ್ರ ಪಡೆಗಳ ನ್ಯಾಯಾಧಿಕರಣ, ಪ್ರಧಾನ ಪೀಠ, ನವದೆಹಲಿ ೨೦೦೯ರ ಟಿ. ಎ. ೫೯೪ ರಿಟ್ ಅರ್ಜಿ (೧೯೯೭ರ ಸಿವಿಲ್ ಸಂಖ್ಯೆ ೫೩೪೯)